"ಶಿವರಾತ್ರಿ ಪ್ರಯುಕ್ತ ಬೆಂಗಳೂರಿನ ಬಸವಭವನದಲ್ಲಿ ’ರುದ್ರಾಕ್ಷಿ ಪ್ರದರ್ಶನ ಮತ್ತು ಮಾರಾಟ’ ವನ್ನು ಏರ್ಪಡಿಸಲಾಗಿದೆ. ನಿಮ್ಮ ಜನ್ಮ ದಿನಾಂಕದ ಪ್ರಕಾರ ನೀವು ಯಾವ ರುದ್ರಾಕ್ಷಿಯನ್ನು ಧರಿಸಬೇಕೆಂದು ತಿಳಿಸುತ್ತಾರೆ, ಅಲ್ಲದೆ ಅತ್ಯಪರೂಪವಾದ ನೀಪಾಳದ "ಏಕಮುಖಿ" ರುದ್ರಾಕ್ಷಿಯ ದರ್ಶನ ಪಡೆದು ನಿಮ್ಮೆಲ್ಲಾ ಪಾಪಗಳಿದ ಮುಕ್ತಿ ಹೊಂದಬಹುದು" ಎಂಬ ಜಾಹೀರಾತನ್ನು ಪೇಪರಿನಲ್ಲಿ ಓದಿ ಕುತೂಹಲ ಉಂಟಾಯಿತು. ರುದ್ರಾಕ್ಷಿಯ ಬಗ್ಗೆ ನನಗೆ ಹೆಚ್ಚೇನೂ ಗೊತ್ತಿರಲಿಲ್ಲ. ಅವುಗಳಲ್ಲಿ ಹೀಗೆಲ್ಲಾ ಮುಖಗಳು ಇರುತ್ವಾ ಅಂತ ಹೇಮಂತರನ್ನು ಕೇಳಿದಾಗ ಅವರು ಪುಟ್ಟ ಲೆಕ್ಚರೇ ಕೊಟ್ಟರು. ರುದ್ರಾಕ್ಷಿ ಮರದ ಬಟಾನಿಕಲ್ ಹೆಸರು:Elaeocarpus sphaericus. ಸುಮಾರು ೩೫-೪೦ ಅಡಿ ಎತ್ತರದ ಮರ. ನೋಡಲು ಮಾವಿನ ಮರದ ಹಾಗೆ ಇರುತ್ತದೆ. ಏಪ್ರೆಲ್ -ಮೇ ನಲ್ಲಿ ಹಳದಿ ಬಣ್ಣದ ಹೂವುಗಳು ಗೊಂಚಲು ಗೊಂಚಲಾಗಿ ಅರಳುತ್ತವೆ. ನೀಲಿ ಬಣ್ಣದ ನಯವಾದ ಹಣ್ಣುಗಳು ಒಣಗಿದ ನಂತರ ಸುಕ್ಕುಸುಕ್ಕಾಗುವುದು. ಇದರ ಬೀಜವೇ ರುದ್ರಾಕ್ಷಿ. ಬೀಜದಲ್ಲಿ ಹಲವು ಗೆರೆಗಳಿರುತ್ತವೆ, ಅದರಲ್ಲಿ ಎಷ್ಟು ಗೆರೆಗಳಿವೆಯೋ ಅಷ್ಟು ಮುಖದ ರುದ್ರಾಕ್ಷಿಯದು. ರುದ್ರಾಕ್ಷಿ ಮಣಿಗೆ ಕೆಲವು ಔಷಧೀಯ ಗುಣಗಳಿವೆ ಎಂದರು. ಪ್ರದರ್ಶನದ ಬಗ್ಗೆ ಅವರಿಗೂ ಕುತೂಹಲ ಉಂಟಾಗಿ ಹೋಗಿ ನೋಡಿ ಬರೋಣವೆಂದು ಹೊರಟೇಬಿಟ್ಟ್ವಿ.
ಪ್ರದರ್ಶನದಲ್ಲಿ ಬಟಾಣಿ ಗಾತ್ರದಿಂದ ಹಿಡಿದು ನಿಂಬೆಹಣ್ಣಿನಷ್ಟು ದಪ್ಪದ ರುದ್ರಾಕ್ಷಿಗಳಿದ್ದವು. ೪೦೦ ರೂಪಾಯಿಂದ ಶುರುವಾಗಿ ೧೦ ಲಕ್ಷದವರೆಗಿನ ಮಣಿಗಳಿದ್ದವು. ಬಂದಿದ್ದ ಸಾರ್ವಜನಿಕರಿಗೆ ಯಾರ್ ಯಾರು ಯಾವ ರುದ್ರಾಕ್ಷಿ ಧರಿಸಬೇಕೆಂಬುದನ್ನು ೩-೪ ಮಂದಿ ಪರಿಣಿತರು ಹೇಳುತ್ತಿದ್ದರು. ನಾವು ರುದ್ರಾಕ್ಷಿ ಕೊಳ್ಳಲು ಬಂದಿಲ್ಲ ಕೇವಲ ವಿಚಾರತಿಳಿದುಕೊಳ್ಳಲು ಬಂದಿರುವುದು ಎಂದರಿತ ಕೌಂಟರ್-ನ ಹುಡುಗರು ನಮ್ಮ ಕಡೆ ಹೆಚ್ಚು ಗಮನ ಕೊಡಲಿಲ್ಲ. ಅಲ್ಲಿ ದರ್ಶನಕ್ಕೆ ಇದ್ದ ಏಕಮುಖಿ ರುದ್ರಾಕ್ಷಿ ಬಹಳ ಅಪರೂಪವಾದದ್ದಂತೆ, ಅದರ ಬೆಲೆ ಹಲವು ಕೋಟಿ ಆಗುವುದು ಎಂದರು. ಸರಿ ಇನ್ನೇನು ಹೊರಡೋಣ ಅನ್ನುವಷ್ಟರಲ್ಲಿ, ನಾವು ಫೋಟೋ ತೆಗೆಯುತ್ತಿದ್ದನ್ನು ಗಮನಿಸಿದ ವ್ಯಕ್ತಿಯೊಬ್ಬರು ಬಂದು ಮಾತಾಡಿಸಿದರು. ಅವರು ರುದ್ರಶಕ್ತಿ ಸಂಸ್ಥೆಯ ಅಧ್ಯಕ್ಷರಾದ ತನ್ಮಯ್. ಅವರು ನಮ್ಮ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ರುದ್ರಾಕ್ಷಿ ಮಣಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಎದ್ದು ಆ ನೀರನ್ನು ಕುಡಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹೃದಯ ರೋಗ, ಸ್ನಾಯು ರೋಗ, ಅಪಸ್ಮಾರ, ಮೂತ್ರಪಿಂಡ, ಸಕ್ಕ್ರರೆಖಾಯಿಲೆ, ಮೂರ್ಚೆ ರೋಗ, ಚ್ರಮರೋಗ, ರಕ್ತದೊತ್ತಡ, ಸಂತಾನ ದೋಷ, ನರದೌರ್ಬಲ್ಯ, ಮಾನಸಿಕ ರೋಗ, ದೃಷ್ಟಿ ದೋಷ ಮುಂತಾದ ಖಾಯಿಲೆಗಳಿಗೆ ಔಷದಿಯಾಗಿ ಆಯುರ್ವೇದದಲ್ಲಿ ರುದ್ರಾಕ್ಷಿಯನ್ನು ಬಳಸುತ್ತಾರೆ ಎಂದು ತಿಳಿಸಿದರು.
ಪೇಟೆಯಲ್ಲಿ ಹಲವರು ನಕಲಿ ರುದ್ರಾಕ್ಷಿಯನ್ನು ಕಮ್ಮಿ ಬೆಲೆಗೆ ಮಾರುತ್ತಿದ್ದಾರೆ. ನಿಜವಾದ ರುದ್ರಾಕ್ಷಿಯನ್ನು ಗುರುತಿಸೋದು ಹೇಗೆ ಎಂಬುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಅದ್ಭುತವಾದ ಈ ರುದ್ರಾಕ್ಷಿಯ ಶಕ್ತಿಯ ಬಗ್ಗೆ ಜನರಿಗೆ ಅರಿವು ಮೂಡಿಸುವುದು ತಮ್ಮ ಈ ಪ್ರದರ್ಶನದ ಗುರಿ ಎಂದರು ತನ್ಮಯ್. ಅಸಲಿ ರುದ್ರಾಕ್ಷಿಯನ್ನು ಗುರುತಿಸುವ ಬಗ್ಗೆ ದೊಡ್ಡ ದೊಡ್ಡ ಬ್ಯಾನರ್ ಹಾಕಿದ್ದರು. ನಿಜವಾದ ರುದ್ರಾಕ್ಷಿ ಮಣಿಯು ನೀರಿನಲ್ಲಿ ಮುಳುಗುತ್ತದಂತೆ. ಬೆಲೆಬಾಳುವ ರುದ್ರಾಕ್ಷಿಯನ್ನು ಕೊಳ್ಳುವ ಮುನ್ನ ಅದರ X-ray ತೆಗೆಸಿ ಒಳಗಿರುವ ಕಂಪಾರ್ಟ್ಮೆಂಟ್-ಗಳು ಹೊರಗಿನ ಗೆರೆಗಳಿಗೆ ಸಮವಾಗಿದ್ದರೆ ಅದು ಅಸಲಿ ರುದ್ರಾಕ್ಷಿ.
ಇನ್ನೂ ಹಲವು ಮಾಹಿತಿ ಇಲ್ಲಿದೆ ಓದಿ.
ರುದ್ರ+ಅಕ್ಷಿ -ರುದ್ರ ಅಂದರೆ ಶಿವನ ರೌದ್ರ ಅವತಾರ,ಅಕ್ಷಿ ಅಂದರೆ ಕಣ್ಣು. ಇದು ಹಿಮಾಲಯ ಪರ್ವತದ ಸಮೀಪ ಹೆಚ್ಚಾಗಿ ನೇಪಾಳದಲ್ಲಿ ಬೆಳೆಯುವುದು, ದಕ್ಷಿಣದಲ್ಲಿ ರಾಮೇಶ್ವರದಲ್ಲಿ ಕೆಲವು ಮರಗಳಿವೆಯಂತೆ.ರುದ್ರಾಕ್ಷಿಯಲ್ಲಿ ಒಂದು ಮುಖದಿಂದ ಹಿಡಿದು ೨೧ ಮುಖದವರೆಗೆ ಭೇದಗಳಿವೆ. ೧,೧೪,೨೧ ಮುಖದ ರುದ್ರಾಕ್ಷಿ ಅಪರೂಪ. ಅದರಲ್ಲೂ ಒಂದು ಮುಖದ ರುದ್ರಾಕ್ಷಿ ಅಪರೂಪದಲ್ಲಿ ಅಪರೂಪ.
ಶಿವನಿಗೂ ರುದ್ರಾಕ್ಷಿಗೂ ಏನು ಸಂಬಂಧ ಎಂಬುದಕ್ಕೆ ಪುರಾಣಗಳಲ್ಲಿ ಒಂದೆರಡು ಕತೆಗಳಿವೆ-
ದೇವಿ ಭಗವತ್ ಪುರಾಣದ ಪ್ರಕಾರ ’ಮಾಯ’ ಎಂಬ ಅತಿ ಶಕ್ತಿಶಾಲಿಯೂ, ಕ್ರೂರಿಯೂ ಆದ ಒಬ್ಬ ರಾಕ್ಷಸನಿದ್ದನು. ಸಾಧು-ಸಂತರಿಗೂ ದೇವತೆಗಳಿಗೂ ತೊಂದರೆಯುಂಟು ಮಾಡುತ್ತಿದ್ದನು. ಅವನನ್ನು ಯುದ್ಧದಲ್ಲಿ ಸೋಲಿಸಲು ಯಾರಿಂದಲೂ ಸಾದ್ಯವಾಗಲಿಲ್ಲ. ಆತನು ಚಿನ್ನ, ಬೆಳ್ಳಿ ಮತ್ತು ಕಬ್ಬಿಣದಿಂದ ಮೂರು ಊರುಗಳನ್ನು ನಿರ್ಮಿಸಿದನು. ಅವಗಳನ್ನು ಬೇಧಿಸಲು ಅಸಾಧ್ಯವಾಗಿತ್ತು, ಅದನ್ನು ’ತ್ರಿಪುರಾ’ ಅಂತಲೂ ಅದರ ಒಡೆಯನಾದ್ದರಿಂದ ಆ ರಾಕ್ಷಸನಿಗೆ "ತ್ರಿಪುರಾಸುರ" ಅಂತಲೂ ಹೆಸರು ಬಂತು. ತನ್ನ ಇಬ್ಬರು ತಮ್ಮಂದಿರೊಡಗೂಡಿ ಸ್ವರ್ಗಾಧಿಪತಿ ಇಂದ್ರನನ್ನೂ ಇತರೆ ದೇವತೆಗಳನ್ನೂ ಸೋಲಿಸಿ ಅವರನ್ನು ಲೂಟಿ ಮಾಡಿದ. ಕಂಗೆಟ್ಟ ದೇವತೆಗಳು ಬ್ರಹ್ಮ,ವಿಷ್ಣು ಜೊತೆಗೂಡಿ ಶಿವನ ಬಳಿ ಬಂದು ತ್ರಿಪುರಾಸುರನನ್ನೂ ನಾಶಮಾಡಿ ತಮ್ಮನ್ನು ಕಾಪಾಡಬೇಕೆಂದು ಬೇಡಿಕೊಂಡರು. ಶಿವ-ತ್ರಿಪುರಾಸುರನ ಯುದ್ಧಕ್ಕೆ ವಿಶೇಷ ಸಿದ್ಧತೆಗಳು ನಡೆದವು. ಭೂಮಿಯೇ ರಥವಾಯಿತು, ಸೂರ್ಯ-ಚಂದಿರರು ಕಾಲ್ಚಕ್ರಗಳಾದರು. ವಿಷ್ಣು ಬಾಣವಾಗಿ, ಬ್ರಹ್ಮ ಸಾರಥಿಯಾಗಿ ಶಿವನ ಜೊತೆಗೂಡಿದರು. ಈ ವಿಶೇಷ ರಥವನ್ನೇರಿ ಹೊರಟ ಶಿವನು ಒಂದೇ ಬಾಣದಿಂದ ತ್ರಿಪುರವನ್ನೂ ಅದರಲ್ಲಿದ್ದ ತ್ರಿಪುರಾಸುರನನ್ನೂ ಕೊನೆಗೊಳಿಸಿದನು. ದೇವತೆಗಳು ಹರ್ಷೋದ್ಗಾರದಿಂದ ಶಿವನ ಹೊಗಳುತ್ತಾ, ಅವನಿಗೆ ಧನ್ಯವಾದಗಳನ್ನು ಅರ್ಪಿಸಿದರು. ತದನಂತರ ಶಿವನು ಹಿಮಾಲಯಕ್ಕೆ ಬಂದು ಕಣ್ಣ್ಮುಚ್ಚಿ ಧ್ಯಾನಮಾಡುತ್ತಾ ಕುಳಿತ. ಧ್ಯಾನಮುಗಿಸಿ ಕಣ್ಣು ತೆರೆದಾಗ ಶಿವನ ಕಣ್ಣಿನಿಂದ ಜಾರಿದ ನೀರಿನ ಹನಿಗಳು ಭೂಮಿಯಮೇಲೆ ಬಿದ್ದವು. ಅವೇ ಮುಂದೆ ರುದ್ರಾಕ್ಷಿ ಮರಗಳಾದವು.
ಶಿವ ಪುರಾಣದ ಪ್ರಕಾರ ಶಿವ ೧೦೦೦ ವರ್ಷ ತಪಗೈದ ಬಳಿಕ ಕಣ್ಣು ತೆರೆದಾಗ ಕಣ್ಣೀರ ಹನಿ ನೆಲಕ್ಕೆ ಬಿತ್ತು.
ಬ್ರಹಜ್ಜಬಾಲ ಉಪನಿಷದ್ ಪ್ರಕಾರ ರುದ್ರ ವಿಶ್ವನಾಶಕ್ಕೆ ಮೂರನೇ ಕಣ್ಣನ್ನು ತೆರೆದ. ನಂತರ ಮುಚ್ಚಿದಾಗ ಉದುರಿದ ಕಣ್ಣೀರಿನ ಹನಿಯೇ ರುದ್ರಾಕ್ಷಿ.
ಒಂದೊಂದು ರುದ್ರಾಕ್ಷಿಗೂ ತನ್ನದೇ ಆದ ವಿಶೇಷ ಶಕ್ತಿಯಿದೆಯಂತೆ. ಅದನ್ನು ಧರಿಸಿದರೆ ಹಲವು ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು ಎಂದರು. ಪ್ರತಿಯೊಂದು ರುದ್ರಾಕ್ಷಿಗೂ ಪ್ರತ್ಯೇಕ ಮಂತ್ರ ಇದೆ ಎಂದು ವಿವರಿಸಿವ pamphlet ಕೊಟ್ಟರು.
Tuesday, February 24, 2009
Tuesday, December 2, 2008
ತಲೆ ಕೆಳಗಾದ ಮುಖ!!
ಮೊನ್ನೆ ರಾತ್ರಿ ಬಾನಿನಲ್ಲಿ ಎಲ್ಲರಿಗೂ ಕಂಡ ನಗು ಮುಖ ನಮಗೆ ಇವತ್ತಾದರೂ ಕಾಣಿಸುತ್ತೋ ಇಲ್ಲವೋ ಅಂತ ಕತ್ತಲಾಗುವದನ್ನೇ ಕಾಯುತ್ತಿದ್ದೆ. ಹೊರಗಡೆ ಹೋದಾಗ ಆಕಾಶದಲ್ಲಿ ಮೋಡವಿಲ್ಲದ್ದು ಕಂಡು ಖುಶಿ ಆಯಿತು. ಹುಡುಕುತ್ತಿದ್ದ ಮುಖ ದರ್ಶನವಾದಾಗ ನಿಧಿ ಸಿಕ್ಕವಳಂತೆ ರೋಡಿನಲ್ಲೇ ಕುಣಿದಾಡಿದೆ. ಅಮೇರಿಕಾದಲ್ಲಿ ಸಪ್ಪೆ ಮೊರೆ ಕಾಣಿಸುವುದಾಗಿ ನ್ಯೂಸ್-ನಲ್ಲಿ ಹೇಳಿದ್ದರು, ಇಲ್ಲಿ ನನಗೆ ಕಂಡದ್ದು ತಲೆ ಕೆಳಗಾದ ಮುಖ!! ಇಲ್ಲಿನ ಆರ್ಥಿಕ ಪರಿಸ್ತಿಥಿಯನ್ನು ಬಿಂಬಿಸುತ್ತಿದೆಯೋ ಏನೋ ಅನ್ನಿಸಿತು.
ಮನೆಯೊಳಗೆ ಓಡಿ ಬಂದು ಕ್ಯಾಮೆರಾ ಹಿಡಿದು ರೋಡಿಗೆ ದೌಡಾಯಿಸಿದೆ. ನೆಗಡಿ ಇದ್ದರಿಂದ ಹೇಮಂತ್ ಹೆಚ್ಚು ಹೊತ್ತು ಫೋಟೋ ತೆಗೆಯುತ್ತಾ ಹೊರಗೆ ನಿಲ್ಲಲಿಲ್ಲ. ನಾನೇ ಫೋಟೋ ತೆಗೆಯಲು ಪ್ರಯತ್ನಿಸಿದೆ, ಅಷ್ಟೇನು ಚೆನ್ನಾಗಿಲ್ಲ...
ಇದ್ದುದರಲ್ಲಿ ವಿಡೀಯೋ ಪರವಾಗಿಲ್ಲ ಅನಿಸುತ್ತೆ. ಅದನ್ನೆ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.
ಮನೆಯೊಳಗೆ ಓಡಿ ಬಂದು ಕ್ಯಾಮೆರಾ ಹಿಡಿದು ರೋಡಿಗೆ ದೌಡಾಯಿಸಿದೆ. ನೆಗಡಿ ಇದ್ದರಿಂದ ಹೇಮಂತ್ ಹೆಚ್ಚು ಹೊತ್ತು ಫೋಟೋ ತೆಗೆಯುತ್ತಾ ಹೊರಗೆ ನಿಲ್ಲಲಿಲ್ಲ. ನಾನೇ ಫೋಟೋ ತೆಗೆಯಲು ಪ್ರಯತ್ನಿಸಿದೆ, ಅಷ್ಟೇನು ಚೆನ್ನಾಗಿಲ್ಲ...
ಇದ್ದುದರಲ್ಲಿ ವಿಡೀಯೋ ಪರವಾಗಿಲ್ಲ ಅನಿಸುತ್ತೆ. ಅದನ್ನೆ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.
Monday, December 1, 2008
ಬಾನಿನಲ್ಲೊಂದು ನಗು ಮುಖ :)
ಪ್ರತಿ ವರ್ಷ ಥ್ಯಾಂಕ್ಸ್ ಗೀವಿಂಗ್ ಗೆ ಇಲ್ಲಿ ಅಮೇರಿಕೆಯಲ್ಲಿ ಕುಟುಂಬದ ಸದಸ್ಯರೆಲ್ಲಾ ಒಂದೆಡೆ ಸೇರುತ್ತಾರೆ. ಇದೇ ಸಮಯಕ್ಕೆ ಈ ವರ್ಷ ಬಾನಿನಲ್ಲಿ ಚಂದಿರ, ಗುರು ಮತ್ತು ಶುಕ್ರ ಗ್ರಹಗಳು ಒಂದೆಡೆ ಕೂಡಿ ನಮ್ಮನ್ನೋಡಿ ನಗೆ ಚೆಲ್ಲುವುದೆಂದು ಹಲವು ದಿನಗಳಿಂದ ನ್ಯೂಸ್ ನಲ್ಲಿ ಬರ್ತಾಯಿತ್ತು.
252,000 ಮೈಲಿ ದೂರವಿರುವ ಚಂದಿರ ಈ ಮೂವರಲ್ಲಿ ನಮಗೆ ತೀರಾ ಹತ್ತಿರದಲ್ಲಿರುವ ಮತ್ತು ಚಿಕ್ಕದಾದ್ದು. ಗುರು ನಮ್ಮಿಂದ 94 million ಮೈಲಿ ದೂರದಲ್ಲಿದ್ದರೆ ಶುಕ್ರ 540 million ಮೈಲಿಗಳು. ಈ ಮೂರು ಆಗಾಗ್ಗೆ ಒಂದರ ಹತ್ತಿರ ಒಂದು ಬರುತ್ತಾವಾದ್ರೂ ಬಹಳಷ್ಟು ಸಲ ಹಾಗಾದಾಗ ಸೂರ್ಯನಿಗೆ ತುಂಬಾ ಹತ್ತಿರದಲ್ಲಿರುವುದರಿಂದ ನಮಗೆ ಈ ಮಿಲನ ಕಾಣಿಸುವುದಿಲ್ಲ. ಈ ಸುಂದರ ಮಿಲನ ಮತ್ತೊಮ್ಮೆ ನಮ್ಮ ಕಣ್ಣಿಗೆ ಗೋಚರಿಸುವುದು Nov. 18, 2052ರಲ್ಲಿ ಅನ್ನುತ್ತಾರೆ ಮೈಯಾಮಿ ಪ್ಲಾನೆಟೇರಿಯಂನ ನಿರ್ದೇಶಕ ಜ್ಯಾಕ್ ಹಾರ್ಕ್-ಹೀಮರ್ ಅವರು.
ಇದನ್ನು ನೋಡಲು ಬಲು ಕಾತುರದಿಂದ ಕಾಯುತ್ತಿದ್ದೆವು ಆದರೆ ಈಗಿಲ್ಲಿ ಮೋಡಕವಿದ ವಾತಾವರಣವಿದ್ದು ನಿನ್ನೆ ಏನೂ ಕಾಣಿಸಲಿಲ್ಲ. ಇಂದು ಅಂತರ್ಜಾಲದಲ್ಲಿ ಎಲ್ಲೆಡೆ ಆ ಸುಂದರ ದೃಶ್ಯದ ಚಿತ್ರಗಳು ಭಿತ್ತರಿಸಿವೆ. ಮೈಸೂರಿನಲ್ಲಿರುವ ಗೆಳೆಯರು ತಾವು ತೆಗೆದ ಈ ಅಪುರೂಪದ ಫೋಟೋಗಳನ್ನ ತಮ್ಮ ಬ್ಲಾಗಿನಲ್ಲೇರಿಸಿದ್ದಾರೆ. ಈ ಚಿತ್ರಗಳನ್ನ ನೋಡ್ತಾಯಿದ್ದ್ರೆ ಡ್ರೀಮ್-ಲ್ಯಾಂಡ್-ನಲ್ಲಿರುವ ಅನುಭವ ಆಗುತ್ತೆ. ಪ್ರಕೃತಿಯ ಸೊಬಗು ಹಣ್ಣಿಗೆ ಹಬ್ಬ ಅಲ್ವ. ಅಂತೆಯೇ ಸಿನೆಮಾಗಳಲ್ಲಿ ಹಾಡಿನ ಸನ್ನಿವೇಶಕ್ಕೆಂದು ತಾರೆಗಳ ಸೆಟ್ಟಿಂಗ್ ನೆನಪಾಯ್ತು. ಇಂದು ಸಂಜೆಗಾದರೂ ನಮಗೆ ಈ ಅಪುರೂಪದ ದೃಶ್ಯ ನೋಡೋ ಭಾಗ್ಯ ಸಿಗುತ್ತಾ ಕಾದು ನೋಡಬೇಕು.
ಆಸ್ಟ್ರೇಲಿಯಾದಲ್ಲಿ ಜನರು ಸೆರೆ ಹಿಡಿದ ಚಿತ್ರಗಳು ಇಲ್ಲಿವೆ. ಹಾಂಗ್-ಕಾಂಗ್ ನಲ್ಲಿರುವ ಗೆಳೆಯರೊಬ್ಬರು ಕಳುಹಿಸಿದ ಫೋಟೋ ಇದು.
ಈ ಫೋಟೋಗಳಂತೆಯೇ ಬಾನಿನಲ್ಲಿ ನಗು ಮುಖ ಮೂಡಿಸಿದ ಇನ್ನು ಕೆಲವು ಫೋಟೋಗಳು ಕೆಲಗಿವೆ ನೋಡಿ. ಯಾವಾಗಲೋ ಅಂತರ್ಜಾಲದಲ್ಲಿ ನೋಡಿದ್ದ ಚಿತ್ರಗಳಿವು, ನನ್ನ ಕಂಪ್ಯೂಟರ್ ನಲ್ಲಿದ್ದವು, ಇವನ್ನು ಸೆರೆಹಿಡಿದು ನಮಗಾಗಿ ಅಂತರ್ಜಾಲದಲ್ಲಿ ಹಾಕಿದವರಿಗೆ ನನ್ನ ಅಭಿನಂದನೆಗಳು.
252,000 ಮೈಲಿ ದೂರವಿರುವ ಚಂದಿರ ಈ ಮೂವರಲ್ಲಿ ನಮಗೆ ತೀರಾ ಹತ್ತಿರದಲ್ಲಿರುವ ಮತ್ತು ಚಿಕ್ಕದಾದ್ದು. ಗುರು ನಮ್ಮಿಂದ 94 million ಮೈಲಿ ದೂರದಲ್ಲಿದ್ದರೆ ಶುಕ್ರ 540 million ಮೈಲಿಗಳು. ಈ ಮೂರು ಆಗಾಗ್ಗೆ ಒಂದರ ಹತ್ತಿರ ಒಂದು ಬರುತ್ತಾವಾದ್ರೂ ಬಹಳಷ್ಟು ಸಲ ಹಾಗಾದಾಗ ಸೂರ್ಯನಿಗೆ ತುಂಬಾ ಹತ್ತಿರದಲ್ಲಿರುವುದರಿಂದ ನಮಗೆ ಈ ಮಿಲನ ಕಾಣಿಸುವುದಿಲ್ಲ. ಈ ಸುಂದರ ಮಿಲನ ಮತ್ತೊಮ್ಮೆ ನಮ್ಮ ಕಣ್ಣಿಗೆ ಗೋಚರಿಸುವುದು Nov. 18, 2052ರಲ್ಲಿ ಅನ್ನುತ್ತಾರೆ ಮೈಯಾಮಿ ಪ್ಲಾನೆಟೇರಿಯಂನ ನಿರ್ದೇಶಕ ಜ್ಯಾಕ್ ಹಾರ್ಕ್-ಹೀಮರ್ ಅವರು.
ಇದನ್ನು ನೋಡಲು ಬಲು ಕಾತುರದಿಂದ ಕಾಯುತ್ತಿದ್ದೆವು ಆದರೆ ಈಗಿಲ್ಲಿ ಮೋಡಕವಿದ ವಾತಾವರಣವಿದ್ದು ನಿನ್ನೆ ಏನೂ ಕಾಣಿಸಲಿಲ್ಲ. ಇಂದು ಅಂತರ್ಜಾಲದಲ್ಲಿ ಎಲ್ಲೆಡೆ ಆ ಸುಂದರ ದೃಶ್ಯದ ಚಿತ್ರಗಳು ಭಿತ್ತರಿಸಿವೆ. ಮೈಸೂರಿನಲ್ಲಿರುವ ಗೆಳೆಯರು ತಾವು ತೆಗೆದ ಈ ಅಪುರೂಪದ ಫೋಟೋಗಳನ್ನ ತಮ್ಮ ಬ್ಲಾಗಿನಲ್ಲೇರಿಸಿದ್ದಾರೆ. ಈ ಚಿತ್ರಗಳನ್ನ ನೋಡ್ತಾಯಿದ್ದ್ರೆ ಡ್ರೀಮ್-ಲ್ಯಾಂಡ್-ನಲ್ಲಿರುವ ಅನುಭವ ಆಗುತ್ತೆ. ಪ್ರಕೃತಿಯ ಸೊಬಗು ಹಣ್ಣಿಗೆ ಹಬ್ಬ ಅಲ್ವ. ಅಂತೆಯೇ ಸಿನೆಮಾಗಳಲ್ಲಿ ಹಾಡಿನ ಸನ್ನಿವೇಶಕ್ಕೆಂದು ತಾರೆಗಳ ಸೆಟ್ಟಿಂಗ್ ನೆನಪಾಯ್ತು. ಇಂದು ಸಂಜೆಗಾದರೂ ನಮಗೆ ಈ ಅಪುರೂಪದ ದೃಶ್ಯ ನೋಡೋ ಭಾಗ್ಯ ಸಿಗುತ್ತಾ ಕಾದು ನೋಡಬೇಕು.
ಆಸ್ಟ್ರೇಲಿಯಾದಲ್ಲಿ ಜನರು ಸೆರೆ ಹಿಡಿದ ಚಿತ್ರಗಳು ಇಲ್ಲಿವೆ. ಹಾಂಗ್-ಕಾಂಗ್ ನಲ್ಲಿರುವ ಗೆಳೆಯರೊಬ್ಬರು ಕಳುಹಿಸಿದ ಫೋಟೋ ಇದು.

ಈ ಫೋಟೋಗಳಂತೆಯೇ ಬಾನಿನಲ್ಲಿ ನಗು ಮುಖ ಮೂಡಿಸಿದ ಇನ್ನು ಕೆಲವು ಫೋಟೋಗಳು ಕೆಲಗಿವೆ ನೋಡಿ. ಯಾವಾಗಲೋ ಅಂತರ್ಜಾಲದಲ್ಲಿ ನೋಡಿದ್ದ ಚಿತ್ರಗಳಿವು, ನನ್ನ ಕಂಪ್ಯೂಟರ್ ನಲ್ಲಿದ್ದವು, ಇವನ್ನು ಸೆರೆಹಿಡಿದು ನಮಗಾಗಿ ಅಂತರ್ಜಾಲದಲ್ಲಿ ಹಾಕಿದವರಿಗೆ ನನ್ನ ಅಭಿನಂದನೆಗಳು.
ಮೋಡಗಳು ನಮ್ಮನ್ನು ನೋಡಿ ನಗೋದು ಹೀಗೆ. 

ಆಕಾಶದಲ್ಲಿ ಹಾರುತ್ತಿರುವ ಹಕ್ಕಿಗಳ ನಗೆ. 

ಏರ್ ಶೋ ಸಮಯದಲ್ಲಿ ಬಂದ ಪ್ರೇಕ್ಷಕರನ್ನು ವಿಮಾನಗಳು ಸ್ವಾಗತಿಸಿದ್ದು ಹೀಗೆ. 
Subscribe to:
Posts (Atom)